ನವರಾತ್ರಿ

ನವರಾತ್ರಿ

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಒಂದು ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು.
ಇಲ್ಲಿ ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.

ನವರಾತ್ರಿಯ ವೈಶಿಷ್ಟ್ಯತೆಗಳು

* ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಹಿಂದೆ ಐದು ನವರಾತ್ರಿ ಆಚರಣೆ ವಿಶೇಷವಾಗಿತ್ತು. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ. ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ.
9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.

* ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.

* ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ.

* ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ.

* ಮೂರನೇ ದಿನ ತದಿಗೆ – ಮಹಿಷಾಸುರ ಮರ್ಧಿನಿ ದುರ್ಗಾಪೂಜಾ.

* ನಾಲ್ಕನೇ ದಿನ ಚತುರ್ದಶಿ – ಶೈಲ ಜಾತಾ ದುರ್ಗಾಪೂಜಾ.

* ಐದನೇ ದಿನ ಪಂಚಮಿ – ದೂಮೃಹಾ ದುರ್ಗಾಪೂಜಾ.

* ಆರನೇ ದಿನ ಶಷ್ಠಿ – ಚಂಡ-ಮುಂಡ ಹಾ ದುರ್ಗಾಪೂಜಾ.

* ಏಳನೇ ದಿನ ಸಪ್ತಮಿ – ರಕ್ತ ಬೀಜ ಹಾ ದುರ್ಗಾಪೂಜಾ.

* ಎಂಟನೇ ದಿನ ಅಷ್ಟಮಿ – ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ)

* ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ.

ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿಯನ್ನೂ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ. ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.

ಪುರಾಣಗಳಲ್ಲಿ ನವರಾತ್ರಿ:

* ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ..
ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.

* ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು, ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ ಹಾಗೂ ಲಾಭಗಳು

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ್ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ್ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’ ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ?

ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರ ಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.

ನವರಾತ್ರಿಯ ಇತಿಹಾಸ:

ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ:

* ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.

* ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ :- ‘ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ ೯ ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

ನವದುರ್ಗೆಯರು:

ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

* ಶೈಲಪುತ್ರಿ :‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

* ಬ್ರಹ್ಮಚಾರಿಣಿ :‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

* ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

* ಕೂಷ್ಮಾಂಡಾ  : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ ? ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

* ಸ್ಕಂದಮಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

* ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.

ಜಗತ್ಪ್ರಸಿದ್ಧ ಅಮೇರಿಕನ್ ಶಾಸ್ತ್ರಜ್ಞರಾದ ಡಾ.ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಆಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.’

* ಕಾಳರಾತ್ರಿ  : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

* ಮಹಾಗೌರಿ  : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

* ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

ದಸರಾ ಹಬ್ಬದ ಮಹತ್ವ:

ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

ದಸರಾ ಶಬ್ದದ ಉತ್ಪತ್ತಿ:

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ

ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?:

ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

* ರಾಜವಿಧಾನ : ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.

ರವೀಂದ್ರ.ಆರ್.ಡಿ.
ಶಾಲಾ ಶಿಕ್ಷಣ ಇಲಾಖೆ.
ಕೊಪ್ಪ

ಪರ್ಯಾಯ ಇಂಧನಗಳು: ಒಂದು ಅಗತ್ಯ

ಪರ್ಯಾಯ ಇಂಧನಗಳು: ಒಂದು ಅಗತ್ಯ

ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲಗಳ ಬಳಕೆ ಹೆಚ್ಚುತ್ತಿರುವುದರಿಂದ, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಇಂಧನ ಸಂಕಷ್ಟದಂತಹ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ. ಈ ಸಮಸ್ಯೆಗಳನ್ನು ನಿಭಾಯಿಸಲು ಪರ್ಯಾಯ ಇಂಧನಗಳ ಅನ್ವೇಷಣೆ ಅಗತ್ಯವಾಗಿದೆ.

ಪರ್ಯಾಯ ಇಂಧನಗಳು ಎಂದರೆ ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾಗಿ ಬಳಸಬಹುದಾದ ಇಂಧನಗಳು. ಇವು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ಸೀಮಿತ ಪರಿಮಾಣದಲ್ಲಿರುವ ಸಾಂಪ್ರದಾಯಿಕ ಇಂಧನಗಳಿಗೆ ಒಂದು ಪರ್ಯಾಯವಾಗಬಲ್ಲವು.

ಪರ್ಯಾಯ ಇಂಧನಗಳ ಪ್ರಕಾರಗಳು

  1. ಸೌರ ಶಕ್ತಿ: ಸೂರ್ಯನಿಂದ ಪಡೆಯುವ ಶಕ್ತಿಯನ್ನು ಸೌರ ಶಕ್ತಿ ಎನ್ನುತ್ತಾರೆ. ಸೌರ ಪ್ಯಾನೆಲ್‌ಗಳ ಮೂಲಕ ಸೂರ್ಯನ ಬೆಳಕನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಬಹುದು. ಈ ವಿದ್ಯುತ್ ಶಕ್ತಿಯನ್ನು ಬಳಸಿ ವಾಹನಗಳನ್ನು ಚಲಾಯಿಸಬಹುದು. ಸೌರ ಶಕ್ತಿಯು ಪರಿಸರ ಸ್ನೇಹಿಯಾಗಿದ್ದು, ಇದು ನವೀಕರಿಸಬಹುದಾದ ಇಂಧನವಾಗಿದೆ.

  2. ಪವನ ಶಕ್ತಿ: ಗಾಳಿಯ ಚಲನೆಯಿಂದ ಪಡೆಯುವ ಶಕ್ತಿಯನ್ನು ಪವನ ಶಕ್ತಿ ಎನ್ನುತ್ತಾರೆ. ಪವನ ಚಕ್ರಗಳ ಮೂಲಕ ಗಾಳಿಯ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಬಹುದು. ಈ ವಿದ್ಯುತ್ ಶಕ್ತಿಯನ್ನು ವಾಹನಗಳನ್ನು ಚಲಾಯಿಸಲು ಬಳಸಬಹುದು. ಪವನ ಶಕ್ತಿಯು ಸೌರ ಶಕ್ತಿಯಂತೆ ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿಯಾಗಿದೆ.

  3. ಜೈವಿಕ ಇಂಧನಗಳು: ಸಸ್ಯಗಳು ಮತ್ತು ಪ್ರಾಣಿಗಳಿಂದ ಪಡೆಯುವ ಇಂಧನಗಳನ್ನು ಜೈವಿಕ ಇಂಧನಗಳು ಎನ್ನುತ್ತಾರೆ. ಬಯೋಡೀಸೆಲ್, ಬಯೋಎಥನಾಲ್ ಇವುಗಳ ಉದಾಹರಣೆಗಳು. ಈ ಇಂಧನಗಳು ಸಾಂಪ್ರದಾಯಿಕ ಇಂಧನಗಳಿಗೆ ಹೋಲಿಸಿದರೆ ಕಡಿಮೆ ಮಾಲಿನ್ಯ ಉಂಟುಮಾಡುತ್ತವೆ.

  4. ಹೈಡ್ರೋಜನ್ ಇಂಧನ: ಹೈಡ್ರೋಜನ್ ಒಂದು ಶುದ್ಧ ಇಂಧನವಾಗಿದ್ದು, ಅದನ್ನು ಬರ್ನ್ ಮಾಡಿದಾಗ ನೀರು ಮಾತ್ರ ಉತ್ಪತ್ತಿಯಾಗುತ್ತದೆ. ಹೈಡ್ರೋಜನ್ ಇಂಧನವು ವಾಹನಗಳಲ್ಲಿ ಬಳಸಲು ಸಾಧ್ಯವಾಗಿದೆ ಮತ್ತು ಇದು ಪರಿಸರ ಸ್ನೇಹಿಯಾಗಿದೆ. ಆದರೆ, ಹೈಡ್ರೋಜನ್ ಅನ್ನು ಉತ್ಪಾದಿಸಲು ಹೆಚ್ಚಿನ ಶಕ್ತಿಯ ಅಗತ್ಯವಿದೆ.

  5. ವಿದ್ಯುತ್ ವಾಹನಗಳು: ವಿದ್ಯುತ್ ಶಕ್ತಿಯನ್ನು ಬಳಸಿ ಚಲಿಸುವ ವಾಹನಗಳನ್ನು ವಿದ್ಯುತ್ ವಾಹನಗಳು ಎನ್ನುತ್ತಾರೆ. ಈ ವಾಹನಗಳು ಯಾವುದೇ ಮಾಲಿನ್ಯ ಉಂಟುಮಾಡುವುದಿಲ್ಲ. ಆದರೆ, ವಿದ್ಯುತ್ ವಾಹನಗಳ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಹೆಚ್ಚಿನ ವಿದ್ಯುತ್ ಶಕ್ತಿಯ ಅಗತ್ಯವಿದೆ.

ಪರ್ಯಾಯ ಇಂಧನಗಳ ಪ್ರಯೋಜನಗಳು

  • ಪರಿಸರ ಸ್ನೇಹಿ
  • ನವೀಕರಿಸಬಹುದಾದ
  • ಇಂಧನ ಸಂಕಷ್ಟವನ್ನು ನಿವಾರಿಸಲು ಸಹಾಯಕ
  • ಮಾಲಿನ್ಯ ಕಡಿತ

ಪರ್ಯಾಯ ಇಂಧನಗಳ ಸವಾಲುಗಳು

  • ಹೆಚ್ಚಿನ ವೆಚ್ಚ
  • ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ
  • ತಂತ್ರಜ್ಞಾನದ ಸಂಕೀರ್ಣತೆ

ಪರ್ಯಾಯ ಇಂಧನಗಳು ಭವಿಷ್ಯದ ಇಂಧನವಾಗಿದೆ. ಸರ್ಕಾರಗಳು ಮತ್ತು ಸಂಸ್ಥೆಗಳು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ. ಜನರು ಸಹ ಪರಿಸರ ಸ್ನೇಹಿ ಇಂಧನಗಳನ್ನು ಬಳಸಲು ಪ್ರೋತ್ಸಾಹಿಸಬೇಕು.

ಪರ್ಯಾಯ ಇಂಧನಗಳ ಬಳಕೆಯನ್ನು ಹೆಚ್ಚಿಸುವುದರಿಂದ ನಮ್ಮ ಗ್ರಹವನ್ನು ಸಂರಕ್ಷಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಸಹಾಯಕವಾಗುತ್ತದೆ.

ನಕ್ಷತ್ರಗಳ ಜೀವನ ಚಕ್ರ

ನಕ್ಷತ್ರಗಳ ಜೀವನ ಚಕ್ರ

ನಕ್ಷತ್ರಗಳು ಕೇವಲ ರಾತ್ರಿ ಆಕಾಶದಲ್ಲಿ ಹೊಳೆಯುವ ವಸ್ತುಗಳಲ್ಲ. ಅವು ಜೀವನ ಚಕ್ರವನ್ನು ಹೊಂದಿರುವ ಬೃಹತ್ ಆಕಾಶಕಾಯಗಳಾಗಿವೆ. ನಕ್ಷತ್ರಗಳ ಜೀವನ ಚಕ್ರವು ಅದ್ಭುತವಾಗಿದೆ ಮತ್ತು ಅದರಲ್ಲಿ ಹಲವು ಹಂತಗಳಿವೆ.

Image of Star Life Cycle

ನಕ್ಷತ್ರದ ಜನನ

ನಕ್ಷತ್ರಗಳ ಜೀವನವು ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿನ ದೊಡ್ಡ ಅನಿಲ ಮತ್ತು ಧೂಳಿನ ಮೋಡಗಳಿಂದ ಪ್ರಾರಂಭವಾಗುತ್ತದೆ. ಈ ಮೋಡಗಳನ್ನು ನೀಹಾರಿಕೆ ಎಂದು ಕರೆಯಲಾಗುತ್ತದೆ. ಗುರುತ್ವ ಬಲದಿಂದಾಗಿ, ಈ ಮೋಡಗಳು ಕುಸಿಯಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಮಧ್ಯಭಾಗದಲ್ಲಿ ಒಂದು ಬಿಸಿಯಾದ ಕೋರ್ ರಚನೆಯಾಗುತ್ತದೆ. ಈ ಕೋರ್ ಅನ್ನು ಪ್ರೋಟೋಸ್ಟಾರ್ ಎಂದು ಕರೆಯಲಾಗುತ್ತದೆ.

ಮುಖ್ಯ ಅನುಕ್ರಮ ಹಂತ

ಪ್ರೋಟೋಸ್ಟಾರ್ ಕ್ರಮೇಣ ಬಿಸಿಯಾಗುತ್ತದೆ ಮತ್ತು ಅದರ ಕೋರ್‌ನಲ್ಲಿ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡವು ಹೈಡ್ರೋಜನ್ ಪರಮಾಣುಗಳನ್ನು ಒಟ್ಟಿಗೆ ಸೇರಿಸಿ ಹೀಲಿಯಂ ಪರಮಾಣುಗಳನ್ನು ರೂಪಿಸಲು ಕಾರಣವಾಗುತ್ತದೆ. ಈ ಪ್ರಕ್ರಿಯೆಯನ್ನು ನ್ಯೂಕ್ಲಿಯರ್ ಸಂಲಯನ ಎಂದು ಕರೆಯಲಾಗುತ್ತದೆ ಮತ್ತು ಇದು ಬೃಹತ್ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಹಂತದಲ್ಲಿ ನಕ್ಷತ್ರವು ಸ್ಥಿರವಾಗಿ ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ಇದನ್ನು ಮುಖ್ಯ ಅನುಕ್ರಮ ಹಂತ ಎಂದು ಕರೆಯಲಾಗುತ್ತದೆ.

ರೆಡ್ ಜೈಂಟ್ ಹಂತ

ನಕ್ಷತ್ರದ ಕೋರ್‌ನಲ್ಲಿನ ಹೈಡ್ರೋಜನ್ ಕ್ರಮೇಣ ಖಾಲಿಯಾಗುತ್ತದೆ. ಇದರಿಂದಾಗಿ ನಕ್ಷತ್ರವು ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ ಮತ್ತು ಅದು ವಿಸ್ತರಿಸಲು ಪ್ರಾರಂಭಿಸುತ್ತದೆ. ನಕ್ಷತ್ರದ ಬಾಹ್ಯ ಭಾಗಗಳು ತಣ್ಣಗಾಗುತ್ತವೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಈ ಹಂತವನ್ನು ರೆಡ್ ಜೈಂಟ್ ಹಂತ ಎಂದು ಕರೆಯಲಾಗುತ್ತದೆ.

ನಕ್ಷತ್ರದ ಮರಣ

ನಕ್ಷತ್ರದ ದ್ರವ್ಯರಾಶಿಯನ್ನು ಅವಲಂಬಿಸಿ, ಅದರ ಮರಣವು ವಿಭಿನ್ನ ರೀತಿಯಲ್ಲಿ ಸಂಭವಿಸುತ್ತದೆ.

  • ಸಣ್ಣ ನಕ್ಷತ್ರಗಳು: ಸೂರ್ಯನಂತಹ ಸಣ್ಣ ನಕ್ಷತ್ರಗಳು ತಮ್ಮ ಬಾಹ್ಯ ಪದರಗಳನ್ನು ಬಾಹ್ಯಾಕಾಶಕ್ಕೆ ಹೊರಹಾಕುತ್ತವೆ ಮತ್ತು ಒಂದು ಸುಂದರವಾದ ನೀಹಾರಿಕೆಯನ್ನು ರಚಿಸುತ್ತವೆ. ನಂತರ, ಉಳಿದ ಕೋರ್ ಒಂದು ಬಿಳಿ ಕುಬ್ಜೆಯಾಗಿ ಸಂಕುಚಿತಗೊಳ್ಳುತ್ತದೆ.
  • ದೊಡ್ಡ ನಕ್ಷತ್ರಗಳು: ದೊಡ್ಡ ನಕ್ಷತ್ರಗಳು ಹೆಚ್ಚು ನಾಟಕೀಯವಾಗಿ ಸಾಯುತ್ತವೆ. ಅವುಗಳ ಕೋರ್‌ನಲ್ಲಿನ ಒತ್ತಡವು ತುಂಬಾ ಹೆಚ್ಚಾದಾಗ, ಅದು ಒಂದು ಬೃಹತ್ ಸ್ಫೋಟದಲ್ಲಿ ಸಿಡಿಯುತ್ತದೆ. ಈ ಸ್ಫೋಟವನ್ನು ಸೂಪರ್ನೋವಾ ಎಂದು ಕರೆಯಲಾಗುತ್ತದೆ. ಸೂಪರ್ನೋವಾ ಸ್ಫೋಟದ ನಂತರ, ನಕ್ಷತ್ರದ ಕೋರ್ ಒಂದು ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪು ಕುಳಿಯಾಗಿ ಪರಿಣಮಿಸಬಹುದು.

ನಕ್ಷತ್ರಗಳ ಜೀವನ ಚಕ್ರವು ಬ್ರಹ್ಮಾಂಡದಲ್ಲಿನ ಅತ್ಯಂತ ಆಕರ್ಷಕ ಮತ್ತು ಸಂಕೀರ್ಣ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಇದು ನಮ್ಮನ್ನು ಆಕಾಶವನ್ನು ನೋಡುವಾಗ ಆಶ್ಚರ್ಯಚಕಿತರಾಗುವಂತೆ ಮಾಡುತ್ತದೆ.

ಗುರು ಪೂರ್ಣಿಮಾ

ಗುರು ಪೂರ್ಣಿಮಾ

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ.

ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.

ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ.

ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.

ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.

ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.

ಹಿಂದೂ ಪುರಾಣ

ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು.
ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.

ಬೌದ್ಧ ಪುರಾಣ

ಬುದ್ಧನು ತನಗೆ ಜ್ಞಾನೋದಯವಾಗಿ ೫ ವಾರಗಳ ನಂತರ ಬೋಧಗಯಾ ಇಂದ ಸಾರನಾಥಕ್ಕೆ ಹೋದನು. ಜ್ಞಾನೋದಯಕ್ಕಿಂತ ಮುಂಚೆ (ಬುದ್ಧನಾಗಬೇಕಿದ್ದ) ಗೌತಮನು ತಾನು ಮಾಡುತ್ತಿದ್ದ ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಬಿಟ್ಟ. ಆಗ ಅವನ ಗೆಳೆಯರಾದ ಪಂಚವಗ್ಗೀಯ ಸನ್ಯಾಸಿಗಳು ಗೌತಮನನ್ನು ಬಿಟ್ಟು ಇಸಿಪತನ (ಸಾರನಾಥ್)ಗೆ ಹೋದರು. ಬುದ್ದನಿಗೆ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಆ ತನ್ನ ಐದು ಸಂಗಾತಿಳು ಧರ್ಮ ಬೋಧನೆಗೆ ಯೋಗ್ಯರಾದವರು ಎಂದು ತಿಳಿದಿದ್ದರಿಂದ ತನಗೆ ಜ್ಞಾನೋದಯವಾದ ನಂತರ ಅವರನ್ನು ಹುಡುಕಿಕೊಂಡು ಉರುವೇಲಾಯಿಂದ ಇಸಿಪತನಕ್ಕೆ ಹೊರಟನು. ಸಾರನಾಥಕ್ಕೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಯಿತು. ನಾವಿಕರಿಗೆ ಕೊಡಲು ದುಡ್ಡು ಇಲ್ಲದ ಕಾರಣ ಗೌತಮ ಬುದ್ಧನು ಗಂಗಾ ನದಿಯನ್ನು ಗಾಳಿಯಲ್ಲಿಯೇ ದಾಟಿದನು. ಇದನ್ನು ಕೇಳಿದ ಅಲ್ಲಿನ ರಾಜಾ ಬಿಂಬಸಾರನು ನದಿ ದಾಟುವ ಸನ್ಯಾಸಿಗಳಿಗೆ ಯಾವುದೇ ರೀತಿಯ ಹಣ ಕೇಳಬಾರದೆಂದು ಆದೇಶ ಹೊರಡಿಸಿದನು. ಗಂಗಾ ನದಿ ದಾಟಿ ಅವನ ಹಳೆಯ ಸಂಗಾತಿಗಳು ಮತ್ತೆ ಸಿಕ್ಕಾಗ ಗೌತಮ ಬುದ್ಧನು ಅವರಿಗೆ ಧರ್ಮ ಬೋಧನೆ ಮಾಡಿದನು. ಅದನ್ನು ಸ್ವೀಕರಿಸಿ ಅರ್ಥ ಮಾಡಿಕೊಂಡ ಆ ಸಂಗಾತಿಗಳಿಗೂ ಜ್ಞಾನೋದಯವಾಯಿತು. ಅವರಿಂದ ಸಂಘ ಎಂಬ ಜ್ಞಾನೋದಯವಾದವರ ಪಂಗಡ ಶುರುವಾಯಿತು. ಅಂದು ಬುದ್ಧ ನೀಡಿದ ಬೋಧನೆ ಅವನ ಮೊದಲನೇಯ ಬೋಧನೆಯಾಗಿದ್ದು ಅದನ್ನು ಧಮ್ಮಚಕ್ಕಪ್ಪವತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ) ಎಂದು ಕರೆಯಲಾಗುತ್ತದೆ. ಇದು ನಡೆದಿದ್ದು ಆಷಾಢ ಪೂರ್ಣಿಮೆಯ ದಿನ. ಮುಂದೆ ಬುದ್ಧನು ತನ್ನ ಮೊದಲನೇಯ ಮಳೆಗಾಲ, ಅಂದರೆ ವರ್ಷ(ವಸ್ಸ), ಇಲ್ಲೇ ಸಾರನಾಥದಲ್ಲಿನ ಮುಲಗಂಧ ಕುಟಿಯಲ್ಲಿ ಕಳೆದನು. ಆ ಸಮಯಕ್ಕೆ ಯಾಸ ಮತ್ತು ಅವನ ಸ್ನೇಹಿತರು ಸೇರಿದ್ದರಿಂದ ಸಂಘದಲ್ಲಿ ೬೦ ಸನ್ಯಾಸಿಗಳಿದ್ದರು. ಬುದ್ಧ ಅವರೆಲ್ಲರನ್ನು ಒಬ್ಬೊಬ್ಬರಾಗಿ ಎಲ್ಲ ದಿಕ್ಕುಗಳಲ್ಲಿ ಧರ್ಮದ ಬೋಧನೆ ಮತ್ತು ಪ್ರಚಾರ ಮಾಡಲು ಕಳಿಸಿದನು. ಆ ೬೦ ಜನರನ್ನು ಅರಹಂತರು ಎಂದು ಕರೆಯುತ್ತಾರೆ .

ಹಿಂದೂ ಮತ್ತು ಬೌದ್ಧ ಆಚರಣೆಗಳು

ಈ ದಿನ ಬೌದ್ಧರು ೮ ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಷ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ.

ಸಾಂಪ್ರದಾಯಿಕವಾಗಿ ಚಾತುರ್ಮಾಸದ ಪದ್ಧತಿಗಳಲ್ಲಿ ಒಂದಾದ ಗುರು ಪೂರ್ಣಿಮೆಯ ಆಂಗವಾಗಿ ವ್ಯಾಸ ಪೂಜೆ ಮಾಡುತ್ತಿರುವ ಸನ್ಯಾಸಿ.
ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಎರ್ಪಿಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳು ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನು ಪ್ರಸಾದದ ಜೊತೆ ಶಿಷ್ಯರಿಗೆ ಹಂಚಲಾಗುತ್ತದೆ.
ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಷ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ.
ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಷ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ.
ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಷ್ಯರು ಸಂಕಲ್ಪ ಮಾಡುತ್ತಾರೆ.
ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ ।
ಗುರು ಸಾಕ್ಷಾತ್ ಪರಬ್ರಹ್ಮ ।
ತಸ್ಮೈ ಶ್ರೀ ಗುರವೇ ನಮಃ.

ಭಾರತ ಶೈಕ್ಷಣಿಕ ವೃಂದದಲ್ಲಿ ಅಚರಣೆ

ಭಾರತ ಶೈಕ್ಷಣಿಕ ವೃಂದದಲ್ಲಿ ಈ ಹಬ್ಬವನ್ನು ಧರ್ಮಾತೀತವಾಗಿ ಆಚರಿಸಲಾಗುತ್ತದೆ. ಹಲವಾರು ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿತವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ ಮತ್ತು ಹಿಂದಿನ ವಿದ್ವಾಂಸರನ್ನು ನೆನೆಸುತ್ತಾರೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

ಮಾಹಿತಿ ಮೂಲ: ವಿಕಿಪೀಡಿಯ

ಸೊಡರು ಸೂರ್ಯನನ್ನು ಮರೆಮಾಚದಿರಲಿ!

ಸೊಡರು ಸೂರ್ಯನನ್ನು ಮರೆಮಾಚದಿರಲಿ!

ವಿಜ್ಞಾನವನ್ನು ಅಥವಾ ಯಾವುದೇ ಜ್ಞಾನ ಶಾಖೆಯ ವಿಷಯಗಳನ್ನು ಆಯಾ ಕ್ಷೇತ್ರದ ಪರಿಣಿತರೇ ಬರೆದರೆ ಅದರ ಮೌಲ್ಯ ಹೆಚ್ಚು. ಅದಕ್ಕೆ ಕೆಲವು ಕಾರಣಗಳಿವೆ

೧) ಪ್ರತಿಯೊಂದು ಕ್ಷೇತ್ರದಲ್ಲಿಯೂ ಅದರದ್ದೇ ಆದ ಒಳನೋಟಗಳು, ನೈಪುಣ್ಯಗಳು, ಹಾಗೂ ಕೇವಲ ಮಾಹಿತಿ-ಮಾತ್ರದಿಂದ ಹಿಡಿದಿಡಲಾರದ ಅನೇಕ ವಿಷಯಗಳು ಇರುತ್ತವೆ. ಇದು ಪರಿಣಿತರಿಗೆ ಮಾತ್ರ ಸಹಜ ಸಾಧ್ಯ. ಉದಾಹರಣೆಗೆ, ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ ಎನ್ನುವುದು ಪುಸ್ತಕದ ‘ಬದನೇಕಾಯಿ’ , ಬೆಳಕು ವಸ್ತುಗಳ ಅಂಚಿಗೆ ಬಾಗುವುದು (diffraction) ಹಾಗೂ  ಗಾಶಿಯನ್ (Gaussian) ಪ್ರೊಫೈಲ್ ನಲ್ಲಿರುವ   ಲೇಸರ್ ಬೆಳಕು ಹಿಗ್ಗುತ್ತಾ, ಕುಗ್ಗುತ್ತಾ ಸಾಗುತ್ತದೆ ಎನ್ನುವುದನ್ನು ಅನುಭವದಿಂದ ಕಂಡುಕೊಳ್ಳಬೇಕು.

೨) ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನದಲ್ಲಿ ಅನೇಕ assumption ಗಳನ್ನು ಮಾಡುವುದು ಅನಿವಾರ್ಯ. ಅಂತಹ assumption ಅಥವಾ ಊಹೆಗಳಿಗೆ ತಕ್ಕಂತೆ ಗ್ರಹಿಕೆ ಸಾಗುತ್ತದೆ. ಗ್ರಹಿಕೆಗೂ ಯಥಾರ್ಥಕ್ಕೂ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳಲು ಒಂದು ಮಟ್ಟಿನ ಪರಿಣಿತಿಯಾದರೂ ಬೇಕಾಗುತ್ತದೆ.

೩) ನೀವು ಸಮುದ್ರದ ಬಗೆಗೆ ತಿಳಿದುಕೊಳ್ಳಬೇಕು ಎಂದುಕೊಳ್ಳಿ, ಅಂತಹ ಸಮುದ್ರದ ತೀರಕ್ಕೆ ಯಾವುದೊ ಬಸ್ಸಿನ ಡ್ರೈವರ್, ಅಥವಾ ಟೂರಿಸ್ಟ್ ಗೈಡ್ ನಿಮ್ಮನ್ನು ಅಲ್ಲಿ ಕರೆದೊಯ್ಯಬಲ್ಲ. ಮತ್ತೋರ್ವ ನಿಮ್ಮನ್ನು ನಯನಮನೋಹರವಾದ ಸಮುದ್ರ ತೀರವನ್ನು ತೋರಿಸಬಲ್ಲ. ನಿಮ್ಮ ಫೋನ್ ಕ್ಯಾಮರಾದಲ್ಲಿ ಸಮುದ್ರತೀರದ ಸೌಂದರ್ಯವನ್ನು, ಸೂರ್ಯಾಸ್ತವನ್ನು ಸೆರೆಹಿಡಿಯಬಹುದು, ಆದರೆ ಕೊನೆಗೆ ನಿಮಗೆ ಸಮುದ್ರದ ಕುರಿತಾದ ಆತ್ಯಂತಿಕ ಪರಿಚಯ ಆಗಬೇಕೆಂದರೆ ಸಮುದ್ರದಾಳವನ್ನು ಹೊಕ್ಕು ಬಂದವನೇ ಬೇಕು. ಉಳಿದೆಲ್ಲರೂ ನಿಮ್ಮನ್ನು ತೀರಕ್ಕೆ ಕರೆದೊಯ್ಯಬಲ್ಲರು, ಅಷ್ಟೇ! ಸಮುದ್ರದ ಆಳ, ಅಗಲ, ಆಗಾಧತೆ, ಭೀಕರತೆ, ಬೆಳಕು ಸಹಿತ ಹೋಗಲಾರದ ನಿಗೂಢ ಅಧೋಲೋಕದ ಅರಿವು ಆಗಬೇಕೆಂದರೆ ಆ ಕುರಿತು ತಿಳಿದವನೇ ಬೇಕು. ಅಲ್ಲವೇ?

೪) ಪರಿಣಿತರಿಂದ ಬರೆಸಬೇಕೆಂಬ ಪ್ರಯತ್ನ ಫಲ ನೀಡಲಿಲ್ಲ ಎಂದು ಓರ್ವ ಹಿರಿಯರು (ನನ್ನ ಹಿಂದಿನ ಪೋಸ್ಟ್ ನೋಡಿ) ಹೇಳಿದರು. ವಿಜ್ಞಾನಕ್ಕೆ ತನ್ನದೇ ಆದ ‘ರಸ’ ಇದೆ. ಅದಕ್ಕೆ ಹೊರಗಿನಿಂದ ಹುಸಿಯಾಗಿ , ರಮ್ಯತೆಯನ್ನು ಹೆಚ್ಚಿಸಲು, ಉತ್ಪ್ರೇಕ್ಷೆ ಗೊಳಿಸುವಂತಹ, ಜನಪ್ರಿಯತೆಯ ವ್ಯಸನಕ್ಕೆ ಬಿದ್ದು ವೈಜ್ಞಾನಿಕ ಮನೋಧರ್ಮಕ್ಕೆ ಹಾಗೂ ನಿಖರತೆಗೆ ಮಾರಕವಾಗುವ ಬರಹಗಳು ಅನಗತ್ಯ. ಈ ಕುರಿತಾದ ಹೆಚ್ಚಿನ ವಿವರಣೆ ಈ ಬರಹದಲ್ಲಿದೆ, ಆಸಕ್ತರು ಗಮನಿಸಿ.

೫) ‘ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ’ ದ ಪ್ರಸಿದ್ಧ ‘ವಿಜ್ಞಾನ’ ಅಂಕಣಕಾರ ರೊಬ್ಬರ ಕುರಿತು, ಹತ್ತಾರು ಪುಸ್ತಕಗಳನ್ನು ಬರೆದ, ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಪೀರ್ reviewed ಜರ್ನಲ್ ಗಳಲ್ಲಿ ಪ್ರಕಟಿಸಿದ ಭಾರತದ ಹಿರಿಯ ವಿಜ್ಞಾನಿಯೋರ್ವರು ಹೇಳಿದ ಮಾತು – ‘ನಾನು ಎರಡು ಭಾರಿ ಅವರಿಗೆ ಫೋನ್ ಮಾಡಿ , ನೀವು ಬರೆದ ಕೆಲವೊಂದು ವಿಷಯಗಳು ಸರಿಯಲ್ಲ, ನಿಖರತೆಯ ಕೊರತೆಯಿದೆ, ಹಾಗೂ ಎಲ್ಲೆಲ್ಲಿ ತಪ್ಪಿದೆ ಎಂದು ವಿವರಿಸಿದೆ, ಇದು ತಪ್ಪು’ ಎಂದು ಹೇಳಿದೆ. ಫೋನಿನಲ್ಲಿ ಸರಿ ಸರಿ ತಿದ್ದಿಕೊಳ್ಳುವೆ ಎಂದು ಹೇಳಿದ ಮಹಾತ್ಮರು ಮತ್ತೆ ತಮ್ಮ ‘ಅಂಕಣ ಕೋರತೆ’ ಯನ್ನು ಮುಂದುವರೆಸಿದರು! – ಎಂದರು. ಎಂತಹ ದುಃಸ್ಥಿತಿ ನೋಡಿ! ಈ ಕುರಿತು ಅಥೆಂಟಿಕ್ ಆಗಿ ಮಾತಾಡಬೇಕಾದವರು ಮೌನವಾಗಿದ್ದಾರೆ, ಅಂಕಣ ಕೊರೆತ ಮುಂದುವರೆದಿದೆ! ಮಾತ್ರವಲ್ಲ, ನಡುನಡುವೆ ರಾಜಕೀಯ ಬೆರೆತು ಒಂದುಬಗೆಯ ‘ವಿಜ್ನಾಕೀಯ ‘ ವಾಗಿದೆ!

೬) “ಪರಿಣಿತಿ, ನೈಪುಣ್ಯ ಹಾಗೂ ನೇರವಾದ ವೈಜ್ಞಾನಿಕ ಅನುಭವವಿಲ್ಲದಿದ್ದರೂ ಇಂತಹ ಬರಹಗಾರರು ಸಮಾಜದಲ್ಲಿ ಒಂದು ಮಟ್ಟಿಗೆ ವೈಜ್ಞಾನಿಕ ಮನೋಧರ್ಮವನ್ನು ಜಾಗೃತವಾಗಿಡುತ್ತಾರೆ, ಆ ಕಾರಣದಿಂದ ಇವರು ಬರೆಯುವುದು ತಪ್ಪಲ್ಲ’ ಎಂದು ಅದೇ ಹಿರಿಯ ವಿಜ್ಞಾನಿಗಳು ಮಾತಾಡುತ್ತಾ ಹೇಳಿದರು. ಅದು ಸರಿ, ಆದರೆ ಸೊಡರು ಸೂರ್ಯನನ್ನು ಮರೆಮಾಚದಿದ್ದರೆ ಒಳ್ಳೆಯದು.

೭) ಸಂಶೋಧನೆಯ ಹಿನ್ನೆಲೆ ಹಾಗೂ ಅಧ್ಯಯನ ಇವೆರಡು ಇಲ್ಲದಿದ್ದರೆ ವಿಜ್ಞಾನದ ಬೆಳವಣಿಗೆ, ಗತಿ, ಮಿತಿ, ವಸ್ತುನಿಷ್ಠತೆಗಳ ಅವಗಾಹನೆ ಇಲ್ಲದೆ ಬರೆದ ಅತಿರಂಜಿತ ಬರಹಗಳು, ಅಥವಾ ಮೂಲ ಸಂಶೋಧನೆಗಳನ್ನು ತಿಳಿದುಕೊಳ್ಳದೆ ಗೂಗಲ್ ಅನುವಾದಿತ ಬರಹಗಳು ಅನೇಕ ತಲೆಮಾರುಗಳ ಓದುಗರನ್ನು ದಾರಿತಪ್ಪಿಸಬಲ್ಲವು.  ಅಂತಹ ಅತಿರಂಜಿತ ಬರಹಗಳನ್ನು(ಉದಾಹರಣೆಗೆ:ಥಾಮಸ್ ಮಿಜಲೇ: Jr . Thomas Midgley)  ಓದಿದ ಓದುಗರು ‘ವಿಜ್ಞಾನ ಹಾಗೂ ತಂತ್ರಜ್ಞಾನಗಳು’ ಮನುಕುಲಕ್ಕೆ ಮಾರಕ ಎಂದು ಸಾರಾ ಸಗಟಾಗಿ ಭಾವಿಸುವ ಅಪಾಯವಿದೆ.

೮) ವಿಜ್ಞಾನ ಲೇಖನವನ್ನು ಪ್ರಕಟಿಸುವ ಸಂಪಾದಕರಿಗೂ ಅಂತಹ ಜ್ಞಾನ ಹಾಗೂ ಕೌಶಲ ಅಗತ್ಯ. ಸೆಕೆಂಡ್ ಹಾರ್ಮೋನಿಕ್ ಜನರೇಶನ್ (ಒಂದು ಆವರ್ತನದ ಬೆಳಕನ್ನು ಒಂದು ವಿಶೇಷ ಸ್ಫಟಿಕದ ಮೂಲಕ ಹಾಯಿಸಿದರೆ ಆ ಬೆಳಕಿನ ಆವರ್ತನ /ಫ್ರೀಕ್ವೆನ್ಸಿ ದ್ವಿಗುಣ ಗೊಳ್ಳುವುದು!) ಕಂಡು ಹಿಡಿದ ವಿಜ್ಞಾನಿಗಳು ಅದನ್ನು ಒಂದು ಭೌತಶಾಸ್ತ್ರದ ನಿಯತಕಾಲಿಕಕ್ಕೆ ಕಳುಹಿಸಿದ್ದರು. ವಿಷಯವನ್ನು ಅರ್ಥೈಸಿಕೊಳ್ಳದ ಎಡಿಟರ್ ಆ ಚುಕ್ಕಿ-ಸದೃಶ ಡೇಟಾ ಅನ್ನು ‘ಏನೋ ಡಸ್ಟ್ ಬಿದ್ದು ಹಾಗಾಗಿರಬಹುದು’ ಎಂದು ಅಳಿಸಿ ಹಾಕಿ ಉಳಿದದ್ದನ್ನು ಪ್ರಕಟಿಸಿದ್ದ! ಹಾಗೆ ಸಂಶೋಧನೆಯ ಮುಖ್ಯ ಅಂಗವೇ ಪ್ರಕಟಣೆಯಿಂದ ಮಾಯವಾಗಿತ್ತು!

– ಕೃಪೆ

ವಿನ್ನಡ.ಇನ್

ಗ್ರಂಥಾಲಯ: ಜ್ಞಾನದ ಭಂಡಾರ

ಗ್ರಂಥಾಲಯ: ಜ್ಞಾನದ ಭಂಡಾರ

ಪೀಠಿಕೆ

ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ. ಹೆಚ್ಚಿನ ವರ್ಗದ ವ್ಯಕ್ತಿಗಳಿಗೆ ಆಸಕ್ತಿ ಅಥವಾ ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಮತ್ತು ಹಣದ ಅನುಪಸ್ಥಿತಿಯಲ್ಲಿ ಅವನು ಜ್ಞಾನ ಮತ್ತು ಶಿಕ್ಷಣದಿಂದ ವಂಚಿತನಾಗಿರುತ್ತಾನೆ. ಆದರೆ ಗ್ರಂಥಾಲಯದ ಮೂಲಕ ಎಲ್ಲಾ ರೀತಿಯ ಪುಸ್ತಕಗಳು ಮತ್ತು ಅವುಗಳ ಜ್ಞಾನವನ್ನು ಸುಲಭವಾಗಿ ಬಳಸಿಕೊಳ್ಳಬಹುದು.

ಪುಸ್ತಕಗಳು ಮಾನವರ ಉತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ನೇಹಿತನೊಂದಿಗೆ ಪ್ರತಿ ಕ್ಷಣದಲ್ಲಿ, ಪ್ರತಿ ಸಮಸ್ಯೆಯಲ್ಲಿ,ಸಹಕಾರಿಯಾಗುತ್ತಾನೆ. ಅದೇ ರೀತಿಯಲ್ಲಿ ಪುಸ್ತಕಗಳು ಮನುಷ್ಯನಿಗೆ ಪ್ರತಿಯೊಂದು ಕಷ್ಟಕರ ಪ್ರಶ್ನೆ, ಪರಿಸ್ಥಿತಿಯ ಪರಿಹಾರವನ್ನು ಪುಸ್ತಕಗಳಲ್ಲಿ ತೆರೆ ಮಾಡಲಾಗಿದೆ.

ಗ್ರಂಥಾಲಯದ ಅರ್ಥ

ಗ್ರಂಥಾಲಯವನ್ನು ಕನ್ನಡದಲ್ಲಿ ಗ್ರಂಥಾಲಯ ಎಂದು ಕರೆಯಲಾಗುತ್ತದೆ, ಇದರರ್ಥ ಒಪ್ಪಂದವನ್ನು ಕಡಿತಗೊಳಿಸಿದಾಗ “ಪುಸ್ತಕ” + “ಅಲಾಯ”, ಅಲಾಯ ಎಂದರೆ “ಸ್ಥಳ”. ಅಂತೆಯೇ, ಗ್ರಂಥಾಲಯ ಎಂದರೆ “ಪುಸ್ತಕಗಳ ಸ್ಥಳ”. ಗ್ರಂಥಾಲಯದಲ್ಲಿ ವಿವಿಧ ರೀತಿಯ ಪುಸ್ತಕಗಳ ಸಂಗ್ರಹವಿದೆ. ಪ್ರತಿ ವಯಸ್ಸಿನ ವ್ಯಕ್ತಿಗೆ ಅವರ ಆಸಕ್ತಿಗೆ ಅನುಗುಣವಾಗಿ ಪುಸ್ತಕಗಳು ಇಲ್ಲಿ ಲಭ್ಯವಿದೆ.

ಗ್ರಂಥಾಲಯದ ಭಾಗಗಳು.

ಸಾಮಾನ್ಯವಾಗಿ, ಗ್ರಂಥಾಲಯವು ಎರಡು ವಿಭಾಗಗಳನ್ನು ಹೊಂದಿರುತ್ತದೆ. ಗ್ರಂಥಾಲಯದಲ್ಲಿ ಒಂದು ಭಾಗವು ಪುಸ್ತಕಗಳನ್ನು ಓದುವುದು ಮತ್ತು ಇನ್ನೊಂದು ಭಾಗವು ಪುಸ್ತಕಗಳನ್ನು ಬಿಡುಗಡೆ ಮಾಡುವುದು.

ಇಲ್ಲಿ ಒಬ್ಬ ಗ್ರಂಥಪಾಲಕ ಇದ್ದಾನೆ, ಅವರು ಗ್ರಂಥಾಲಯಕ್ಕೆ ಬರುವ ಜನರ ಪಟ್ಟಿಯ ಬಗ್ಗೆ ಮಾಹಿತಿಯನ್ನು ಇಡುತ್ತಾರೆ.

ಓದುವಿಕೆ ವಿಭಾಗ 

ಈ ಕೋಣೆಯಲ್ಲಿ ಇಡೀ ಗ್ರಂಥಾಲಯವನ್ನು ನೋಡಿಕೊಳ್ಳಲು ಗ್ರಂಥಪಾಲಕರು ಇದ್ದಾರೆ. ಗ್ರಂಥಪಾಲಕರಿಂದ ಗ್ರಂಥಾಲಯದಲ್ಲಿ ಇರಿಸಲಾಗಿರುವ ಪುಸ್ತಕಗಳು, ಗ್ರಂಥಾಲಯಕ್ಕೆ ಬರುವ ವ್ಯಕ್ತಿಗಳ ಪಟ್ಟಿ, ಅವರು ನೀಡಿದ ಪುಸ್ತಕಗಳ ದಾಖಲೆಗಳನ್ನು ಇಡಲಾಗಿದೆ. ಯಾವ ಜನರು ಗ್ರಂಥಾಲಯಕ್ಕೆ ಬರುತ್ತಿದ್ದಾರೆ ಮತ್ತು ಅವರು ಓದಲು ಆಯ್ಕೆ ಮಾಡಿದ ಪುಸ್ತಕಗಳನ್ನು ಪುಸ್ತಕಗಳನ್ನು ನೀಡುವ ಭಾಗವಾಗಿ ಗ್ರಂಥಪಾಲಕರು ನಿರ್ವಹಿಸುತ್ತಾರೆ.

ಯಾವುದೇ ಸಂದಿಗ್ಧ ಸ್ಥಿತಿಯಲ್ಲಿರುವ ಮನುಷ್ಯ, ಪುಸ್ತಕಗಳನ್ನು ಓದುವುದು, ಅರ್ಥಮಾಡಿಕೊಳ್ಳುವುದು, ಅವನ ಆಲೋಚನೆ ವಿಸ್ತರಿಸುತ್ತದೆ. ಕೆಲವರು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಕೆಲವರು ವೈವಿಧ್ಯಮಯ ಪುಸ್ತಕಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ.

ಎರಡು ರೀತಿಯ ಗ್ರಂಥಾಲಯಗಳಿವೆ :

  • ಸಾರ್ವಜನಿಕ ಗ್ರಂಥಾಲಯ : ಈ ಗ್ರಂಥಾಲಯವು ಎಲ್ಲಾ ವರ್ಗದ ಜನರಿಗೆ ಲಭ್ಯವಿದೆ. ಯಾವುದೇ ವ್ಯಕ್ತಿ ಈ ಗ್ರಂಥಾಲಯಕ್ಕೆ ಹೋಗಿ ತನ್ನ ಅಪೇಕ್ಷಿತ ಪುಸ್ತಕವನ್ನು ಓದಬಹುದು.
  •  ಖಾಸಗಿ ಗ್ರಂಥಾಲಯ:  ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ವೈದ್ಯರು ಮುಂತಾದ ಕೆಲವು ವರ್ಗಗಳಿಗೆ ಸೇರಿದ ಜನರು ತಮ್ಮ ವೃತ್ತಿಗೆ ಸಂಬಂಧಿಸಿದ ಹಲವು ಅಂಶಗಳನ್ನು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ವಿಭಿನ್ನ ಪುಸ್ತಕಗಳ ಅಗತ್ಯವಿದೆ.ಆದ್ದರಿಂದ, ಅವರು ತಮ್ಮ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಿ ತಮ್ಮದೇ ಆದ ಗ್ರಂಥಾಲಯವನ್ನು ತಯಾರಿಸುತ್ತಾರೆ.

ವಿಷಯ ಬೆಳವಣಿಗೆ

1. ವಿಷಯ ಪ್ರವೇಶ 

ಇವುಗಳನ್ನು ಒಂದೆಡೆ ಸುರಕ್ಷಿತವಾಗಿಡುವುದು , ಅಗತ್ಯಬಿದ್ದಾಗ ತಮಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಂಡು ಅದರ ಲಾಭ ಪಡೆಯುವುದು ಒಳ್ಳೆಯದು , ಪುಸ್ತಕಗಳನ್ನು ಕಸದಂತೆ ಮೂಲೆಯಲ್ಲಿ ಒಟ್ಟುವುದು , ರದ್ದಿಯಂತೆ ರಾಶಿ ಹಾಕುವುದು ಸರಿಯಲ್ಲ ಮುದ್ರಣ ಕಲೆಯಲ್ಲಿ ಹೊಸ ಹೊಸ ಆವಿಷ್ಕಾರವಾಗುತ್ತಿದ್ದಂತೆ ಪುಸ್ತಕಗಳ ಸಂಖ್ಯೆ ಹೆಚ್ಚತೊಡಗಿದೆ . ಇವುಗಳನ್ನು ಒಂದೆಡೆ ಶೇಖರಿಸಿಡುವುದು ವ್ಯವಸ್ಥಿತವಾಗಿ ಜೋಡಿಸುವುದು ಇತ್ಯಾದಿ ವ್ಯವಸ್ಥೆಯೇ ಪುಸ್ತಕ ಭಂಡಾರ .

ಪ್ರಾಚೀನ ಕಾಲದಲ್ಲಿ ತಾಳೆಗರಿ , ಭೂರ್ಜ್ವಪತ್ರಗಳಲ್ಲಿ ಅಡಗಿದ್ದ ಜ್ಞಾನಸಂಪತ್ತು ಸೀಮಿತವಾಗಿದ್ದು ಅವುಗಳನ್ನು ಸುರಕ್ಷಿತವಾಗಿಡುವುದು ಅಂಥ ಸಮಸ್ಯೆ ಆಗಿರಲಿಲ್ಲ. ಆದರೆ ಬೃಹದಾಕಾರವಾಗಿ ಬೆಳೆದಿರುವ ಪುಸ್ತಕೋದ್ಯಮ ಸುಸಜ್ಜಿತ ಗ್ರಂಥಭಂಡಾರಕ್ಕೆ ನಾಂದಿಯಾಗಿದೆ .

2. ಸರಸ್ವತಿಯ ದೇಗುಲ

ಜ್ಞಾನಪ್ರಾಪ್ತಿಗೆ ತಾಯಿ ಸರಸ್ವತಿಯ ದೇಗುಲಗಳೆಂದರೆ ವಿದ್ಯಾಲಯಗಳು ಮತ್ತು ಪುಸ್ತಕಭಂಡಾರಗಳು , ಪುಸ್ತಕದ ಅಭಿರುಚಿಯಿರುವ ಪುಸ್ತಕಪ್ರೇಮಿ ಹಾಗೂ ಅಧ್ಯಯನ ಶೀಲ ವಿದ್ವಾಂಸ ತನ್ನದೇ ಆದ ಸ್ವಂತ ಪುಸ್ತಕಭಂಡಾರವನ್ನು ಹೊಂದಿರುತ್ತಾನೆ. ಒಂದು ವೇಳೆ ತನ್ನ ನಂತರ ತನ್ನ ಕುಟುಂಬದ ಯಾವ ಸದಸ್ಯನಿಗೂ ಅದರ ಬಗ್ಗೆ ಆಸಕ್ತಿಯಿಲ್ಲ ಅನ್ನಿಸಿದರೆ ಬೇರೊಂದು ಸುಸಜ್ಜಿತ ಗ್ರಂಥ ಭಂಡಾರಕ್ಕೆ ಅವುಗಳನ್ನು ನೀಡುತ್ತಾನೆ.

3, ಮನರಂಜನೆಯ ಸಾಧನೆ

ಪುಸ್ತಕ ಪ್ರತಿಯೊಂದು ಶಾಲಾ , ಕಾಲೇಜು , ವಿದ್ಯಾಲಯಗಳಲ್ಲಿ ಅಲ್ಲಿಯ ಅಗತ್ಯಕ್ಕೆ ತಕ್ಕಂತೆ ಪುಸ್ತಕ ಭಂಡಾರವಿದ್ದು ವಿದ್ಯಾರ್ಥಿಗಳು , ಅಧ್ಯಾಪಕರು ಅದರ ಉಪಯೋಗ ಪಡೆಯುತ್ತಾರೆ . ಗ್ರಂಥಾಲಯಾಧಿಕಾರಿ ಭಂಡಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾನೆ. ಇಂಥ ಅಧಿಕಾರಿ ಗ್ರಂಥ ಭಂಡಾರದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪದವೀಧರನಾಗಿರುತ್ತಾನೆ . ಜ್ಞಾನಾರ್ಜನೆಯ ಜೊತೆಗೆ ಮನರಂಜನೆ ಪಡೆಯಲು ಅಗತ್ಯವಾದ ಕತೆ , ಕಾದಂಬರಿ , ನಾಟಕ , ಕಾವ್ಯ ಇತ್ಯಾದಿಗೆ ಸಂಬಂಧಿಸಿದ ಪುಸ್ತಕಗಳು ಇಲ್ಲಿರುತ್ತವೆ .ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮಗಳಲ್ಲಿ ಜನಸಾಮಾನ್ಯರಿಗಾಗಿ ಗ್ರಂಥಾಲಯಗಳಿರುತ್ತವೆ . ಕತೆ , ಕಾದಂಬರಿ , ನಾಟಕ , ಜ್ಞಾನ – ವಿಜ್ಞಾನ ಧರ್ಮ , ಇತಿಹಾಸ , ಭೂಗೋಳ , ಸಾಹಿತ್ಯ , ರಾಜನೀತಿ ಇತ್ಯಾದಿ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳು ಇಲ್ಲಿರುತ್ತವೆ. ಅಂತೆಯೇ ಬೇರೆ ಬೇರೆ ಭಾಷೆಯ ಜನರಿಗಾಗಿ ಹಲವಾರು ಪುಸ್ತಕಗಳು ಇರುವುದು ನಿಯಮದಂತೆ ಶುಲ್ಕ ಪಾವತಿಸಿ ಈ ಗ್ರಂಥಾಲಯದ ಸದಸ್ಯರಾಗಲು ಅವಕಾಶವಿದೆ .

 4 . ಸಂದೇಶ ಜ್ಞಾನಪ್ರಾಪ್ತಿಗೆ ಪುಸ್ತಕಗಳು ಅಗತ್ಯ

ಕೆಲವು ಗ್ರಂಥಾಲಯಗಳನ್ನು ರಾಜ್ಯ ಸರ್ಕಾರ , ಕೇಂದ್ರ ಸರ್ಕಾರ ನಡೆಸುತ್ತವೆ . ಇಲ್ಲಿ ಪುಸ್ತಕಗಳ ಬೃಹತ್ ಸಂಗ್ರಹವಿದ್ದು ಜ್ಞಾನದಾಹಿಗಳಿಗೆ ಬೇಕಾದ ಎಲ್ಲ ಬಗೆಯ ಪುಸ್ತಕಗಳೂ ಸಿಕ್ಕುತ್ತವೆ . ದೇಶ ವಿದೇಶಗಳ , ಬೇರೆ ಬೇರೆ ಭಾಷೆಗಳ ಅತ್ಯುತ್ತಮ ಪುಸ್ತಕಗಳ ಸಂಗ್ರಹ ಇಲ್ಲಿರುತ್ತದೆ .ಕಲ್ಕತ್ತಾ , ಚಿನ್ಯ , ದಿಲ್ಲಿ , ಬೊಂಬಾಯಿಗಳಲ್ಲಿ ಕೇಂದ್ರ ಸರ್ಕಾರದ ಬೃಹತ್‌ ಪುಸ್ತಕ ಭಂಡಾರವಿದೆ . ಕಲ್ಕತ್ತಾದಲ್ಲಿನ ‘ ರಾಷ್ಟ್ರೀಯ ಪುಸ್ತಕಾಲಯ  ದೇಶದ ಅತಿ ದೊಡ್ಡ ಪುಸ್ತಕಾಲಯ ,  ಪುಸ್ತಕದಲ್ಲಿ ಅಗತ್ಯವಾದ ಪ್ಯಾರಾ , ಲೇಖನ ಇತ್ಯಾದಿಯನ್ನು ನಕಲು ಮಾಡಿಕೊಳ್ಳಲು ,ಟೈಪಿಂಗ್ , ಫೋಟೋ ಇತ್ಯಾದಿ  ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿರುತ್ತವೆ

5.ಓದುಗರ ಕರ್ತವ್ಯ

ಓದುಗರು ಪುಸ್ತಕಗಳನ್ನು ಹಾಳುಮಾಡಬಾರದು . ಕೊಳಕುಮಾಡಬಾರದು ಹಾಳೆ ಹರಿಯುವುದು , ಮಡಿಸುವುದು ಇತ್ಯಾದಿ ಮಾಡಬಾರದು . ನಿಗದಿತ ಸಮಯಕ್ಕೆ ಸರಿಯಾಗಿ ತಾವು ಎರವಲು ಕೊಂಡೊಯ್ದ ಪುಸ್ತಕಗಳನ್ನು ಹಿಂದಿರುಗಿಸಬೇಕು .ಇದರಿಂದ ಬೇರೆಯವರಿಗೆ ಅಗತ್ಯವನ್ನು ಪೂರೈಸಿದಂತಾಗುತ್ತದೆ .

6. ಜ್ಞಾನದಾಹಿಯ ಕಾಮಧೇನು

ಪುಸ್ತಕ ಮನುಷ್ಯನ ಮಿತ್ರ , ಜ್ಞಾನ ನೀಡುವ ಕಾಮಧೇನು , ವ್ಯಕ್ತಿತ್ವ ನಿರ್ಮಾಣದ ಹೆಬ್ಬಾಗಿಲು , ಮಾರ್ಗದರ್ಶಕ , ಪುಸ್ತಕ ಖರೀದಿಸಲು ಸಾಧ್ಯವಾಗದ ಜ್ಞಾನದಾಹಿಗೆ ಪುಸ್ತಕಾಲಯಗಳು ಒಂದು ವರ ಇದ್ದಂತ , ಪುಸ್ತಕ ಭಂಡಾರಗಳಲ್ಲಿ ವಾಚನಾಲಯ ವಿಭಾಗವೂ ಇದ್ದು ಪತ್ರಿಕೆಗಳನ್ನು ಓದುವ ಸವಲತ್ತು ಇರುತ್ತದೆ . ನಾವು ಪುಸ್ತಕಾಲಯದಲ್ಲಿ ಗಂಭೀರವಾಗಿ ಅಧ್ಯಯನ ಮಾಡಬೇಕು . ಮಾತಾಡದೆ , ನಿಶ್ಯಬ್ದವಾಗಿರಬೇಕು .ಬೇರೆಯವರಿಗೆ ತೊಂದರೆಯಾಗದಂತೆ ವರ್ತಿಸಬೇಕು . ಈ ಪುಸ್ತಕ ಭಂಡಾರದ ಸಂದೇಶವೆಂದರೆ – “ ಜ್ಞಾನವೃದ್ಧಿಗಾಗಿ ಒಳಗೆ ಬಾ ಮಾನವ , ಸೇವಗೆ ಹೊರಗೆ ಹೋಗು . “ಪುಸ್ತಕಗಳು ಮಾನವರ ಉತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ನೇಹಿತನೊಂದಿಗೆ ಪ್ರತಿ ಕ್ಷಣದಲ್ಲಿ, ಪ್ರತಿ ಸಮಸ್ಯೆಯಲ್ಲಿ,ಅದೇ ರೀತಿಯಲ್ಲಿ ಪುಸ್ತಕಗಳು ಮನುಷ್ಯನಿಗೆ ಪ್ರತಿ ಬೆಸ ಪರಿಸ್ಥಿತಿಯಲ್ಲಿಯೂ ಸಹಕಾರಿಯಾಗುತ್ತವೆ.

ಪ್ರತಿಯೊಂದು ಕಷ್ಟಕರ ಪ್ರಶ್ನೆ, ಪರಿಸ್ಥಿತಿಯ ಪರಿಹಾರವನ್ನು ಪುಸ್ತಕಗಳಲ್ಲಿ ತೆರೆ ಮಾಡಲಾಗಿದೆ.ಯಾವುದೇ ಸಂದಿಗ್ಧ ಸ್ಥಿತಿಯಲ್ಲಿರುವ ಮನುಷ್ಯ, ಪುಸ್ತಕಗಳನ್ನು ಓದುವುದು, ಅರ್ಥಮಾಡಿಕೊಳ್ಳುವುದು, ಅವನ ಆಲೋಚನೆ ವಿಸ್ತರಿಸುತ್ತದೆ. ಕೆಲವರು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಅವರು ವೈವಿಧ್ಯಮಯ ಪುಸ್ತಕಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ.ಶಾಂತವಾದ ಕೋಣೆ, ಸಾಕಷ್ಟು ಪುಸ್ತಕಗಳು, ಅನೇಕ ಜನರು, ಇನ್ನೂ ಶಾಂತವಾಗಿದ್ದಾರೆ. ಏನಾದರೂ ನೆನಪಿದೆಯೇ? ಹೌದು ! ನಾನು “ಲೈಬೇರೆರಿ” ಅಥವಾ “ಲೈಬ್ರರಿ”ಎಂದು ಕರೆಯಲ್ಪಡುವ ಪುಸ್ತಕಗಳಿಂದ ತುಂಬಿದ ಕೋಣೆಯ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ನಾವು ಅನೇಕ ಬಾರಿ ಗ್ರಂಥಾಲಯಕ್ಕೆ ಹೋಗಿರಬೇಕು.

ಗ್ರಂಥಾಲಯದ ಸದಸ್ಯರಾಗಲು ಸಾಮಾನ್ಯ ನಿಯಮಗಳು

ಅಂತಹ ವಿಭಿನ್ನ ಗ್ರಂಥಾಲಯಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ, ಆದರೆ ಇನ್ನೂ ಕೆಲವು ನಿಯಮಗಳನ್ನು ಪ್ರತಿ ಗ್ರಂಥಾಲಯದಲ್ಲಿ ಅನ್ವಯಿಸಲಾಗುತ್ತದೆ. ಗ್ರಂಥಾಲಯದಲ್ಲಿ ಪರಿಗಣಿಸಲಾದ ಕೆಲವು ಸಾಮಾನ್ಯ ನಿಯಮಗಳನ್ನು ಕೆಳಗೆ ನೀಡಲಾಗಿದೆ: ಗ್ರಂಥಾಲಯದ ಸದಸ್ಯರಾಗಲು, ಕೆಲವು ಶುಲ್ಕವನ್ನು ಗ್ರಂಥಾಲಯದಲ್ಲಿ ಮಾಸಿಕ ಪಾವತಿಸಲಾಗುವುದು. ಒಮ್ಮೆ ನೀವು ಗ್ರಂಥಾಲಯದ ಸದಸ್ಯರಾದ ನಂತರ, ಒಬ್ಬ ವ್ಯಕ್ತಿಯು ತನ್ನ ಆಯ್ಕೆಯ ಯಾವುದೇ ಪುಸ್ತಕವನ್ನು ಗ್ರಂಥಾಲಯದಲ್ಲಿ ಓದಬಹುದು.

ಯಾವುದೇ ಗ್ರಂಥಾಲಯದ ಸದಸ್ಯರಾಗುವ ಸಮಯದಲ್ಲಿ, ಆರಂಭದಲ್ಲಿ ಶುಲ್ಕವನ್ನು ರಕ್ಷಣೆಯ ರೂಪದಲ್ಲಿ ಜಮಾ ಮಾಡಬೇಕಾಗುತ್ತದೆ. ಪುಸ್ತಕಗಳ ನಿರ್ವಹಣೆಗಾಗಿ ಈ ಶುಲ್ಕವನ್ನು ವಿಧಿಸಲಾಗುತ್ತದೆ.ನಿಗದಿತ ಸಮಯದೊಳಗೆ ಪುಸ್ತಕಗಳನ್ನು ಹಿಂತಿರುಗಿಸಬೇಕು. ವಿವಿಧ ಗ್ರಂಥಾಲಯಗಳು ಪುಸ್ತಕಗಳನ್ನು ಸಲ್ಲಿಸಲು ಮತ್ತು ಹಿಂದಿರುಗಿಸಲು ವಿಭಿನ್ನ ನಿಯಮಗಳನ್ನು ಹೊಂದಿವೆ.

ಗ್ರಂಥಾಲಯದ ಅನುಕೂಲಗಳು / ಉಪಯೋಗಗಳು / ಪ್ರಾಮುಖ್ಯತೆ.:

ಸುಲಭ ದಾರಿ : ಎಲ್ಲಾ ವಿಷಯಗಳ ಪುಸ್ತಕಗಳನ್ನು ಖರೀದಿಸುವುದು ಎಲ್ಲರಿಗೂ ಸುಲಭವಲ್ಲ. ಕೆಲವು ಬಡ ಜನರು ದುಬಾರಿ ಪುಸ್ತಕಗಳನ್ನು ಪಡೆಯಲು ಸಾಧ್ಯವಿಲ್ಲ. ಅವರಿಗೆ, ಗ್ರಂಥಾಲಯವು ಬಹಳ ಸುಲಭವಾಗಿ ಮತ್ತು ಸುಲಭವಾದ ಪುಸ್ತಕಗಳ ಮಾಧ್ಯಮವಾಗಿದೆ.

ಅನೇಕ ಜನರು ಒಂದೇ ವೆಚ್ಚದಲ್ಲಿ ಪ್ರಯೋಜನ ಪಡೆಯುತ್ತಾರೆ:
ಪುಸ್ತಕವು ಗ್ರಂಥಾಲಯಕ್ಕೆ ಬಂದ ನಂತರ, ಅದನ್ನು ಅನೇಕ ಜನರು ಓದುತ್ತಾರೆ. ಮತ್ತೆ ಅದನ್ನು ಗ್ರಂಥಾಲಯಕ್ಕೆ ಹಿಂತಿರುಗಿಸುತ್ತಾರೆ, ಅದನ್ನು ಬೇರೊಬ್ಬರನ್ನು ಓದಲು ಬಳಸಲಾಗುತ್ತದೆ.

ಕಡಿಮೆ ಬೆಲೆಗೆ ಲಭ್ಯವಿರುವ ಪುಸ್ತಕಗಳು:
ಗ್ರಂಥಾಲಯದಲ್ಲಿ, ಒಬ್ಬ ವ್ಯಕ್ತಿಯು ಕಡಿಮೆ ವೆಚ್ಚದಲ್ಲಿ ಅನೇಕ ಪುಸ್ತಕಗಳನ್ನು ಓದಬಹುದು ಮತ್ತು ಅವನ ಜ್ಞಾನವನ್ನು ಹೆಚ್ಚಿಸಬಹುದು.

ವ್ಯಕ್ತಿಯು ಆರಂಭಿಕ ಶುಲ್ಕ ಮತ್ತು ಕಡಿಮೆ ಮಾಸಿಕ ಶುಲ್ಕದಲ್ಲಿ ಮಾತ್ರ ಗ್ರಂಥಾಲಯದ ಸದಸ್ಯನಾಗಬಹುದು ಮತ್ತು ಅಲ್ಲಿ ಇರಿಸಲಾಗಿರುವ ಹೆಚ್ಚಿನ ಸಂಖ್ಯೆಯ ಪುಸ್ತಕಗಳ ಲಾಭವನ್ನು ಪಡೆಯಬಹುದು.

ಶಾಂತಿ: ಗ್ರಂಥಾಲಯದಲ್ಲಿ ಸಾಕಷ್ಟು ಶಾಂತಿ ಇದೆ. ಅಲ್ಲಿ ಅಧ್ಯಯನ ಮಾಡುವವರಿಗೆ “ಮಾತನಾಡಬಾರದು” ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗುತ್ತದೆ.

ಗ್ರಂಥಾಲಯದ ವಿವಿಧ ಸ್ಥಳಗಳಲ್ಲಿ, “ದಯವಿಟ್ಟು ಶಬ್ದ ಮಾಡಬೇಡಿ”, “ಶಾಂತಿಯನ್ನು ಕಾಪಾಡಿಕೊಳ್ಳಿ” ಎಂಬ ಪದಗಳೊಂದಿಗೆ ಅನೇಕ ಫಲಕಗಳು ಅಥವಾ ಗೋಡೆಗಳನ್ನು ಬರೆಯಲಾಗಿದೆ. ಇಲ್ಲಿ ಕುಳಿತುಕೊಳ್ಳುವ ಮೂಲಕ, ಒಬ್ಬ ವ್ಯಕ್ತಿಯು ಶಾಂತ ಮತ್ತು ಗಮನಹರಿಸುವ ಮೂಲಕ ಪುಸ್ತಕವನ್ನು ಓದುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಬಹುದು.ಇಲ್ಲಿ ಧ್ಯಾನ ಅಲೆದಾಡುವುದಿಲ್ಲ.

ಜ್ಞಾನವನ್ನು ಹೆಚ್ಚಿಸಲು ಖಚಿತವಾದ ಮಾರ್ಗ:
ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ.ಸರಾಸರಿ ವರ್ಗದ ವ್ಯಕ್ತಿಗೆ ಆಸಕ್ತಿ ಅಥವಾ ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಮತ್ತು ಹಣದ ಅನುಪಸ್ಥಿತಿಯಲ್ಲಿ ಅವನು ಜ್ಞಾನ ಮತ್ತು ಶಿಕ್ಷಣದಿಂದ ವಂಚಿತನಾಗಿರುತ್ತಾನೆ.ಆದರೆ ಗ್ರಂಥಾಲಯದ ಮೂಲಕ ಎಲ್ಲಾ ರೀತಿಯ ಪುಸ್ತಕಗಳು ಮತ್ತು ಅವುಗಳ ಜ್ಞಾನವನ್ನು ಸುಲಭವಾಗಿ ಬಳಸಿಕೊಳ್ಳಬಹುದು

ಪುಸ್ತಕ ಓದುವುದರಿಂದ ಆಗುವ ಲಾಭಗಳು
ಪ್ರತಿಯೊಬ್ಬರೂ ವಿಭಿನ್ನ ವಿಷಯಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಯಾವುದೇ ವಯಸ್ಸಿನ ಮಕ್ಕಳು, ವೃದ್ಧರು ಮತ್ತು ಯುವಕರು ತಮ್ಮ ಹವ್ಯಾಸಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.ವಿಭಿನ್ನ ವಿಷಯಗಳ ಪುಸ್ತಕಗಳನ್ನು ಓದುವ ಮೂಲಕ, ಪ್ರತಿಯೊಬ್ಬ ಕ್ಷೇತ್ರದ ಜ್ಞಾನವು ವ್ಯಕ್ತಿಯಲ್ಲಿ ಹೆಚ್ಚಾಗುತ್ತದೆ.ಕಾಮಿಕ್ಸ್, ಕಥೆಗಳು, ಕಾದಂಬರಿಗಳು, ನಾಟಕಗಳು ಇತ್ಯಾದಿಗಳನ್ನು ಓದುವುದರಿಂದ ವ್ಯಕ್ತಿಯಲ್ಲಿ ಕಾಲ್ಪನಿಕತೆ ಹೆಚ್ಚಾಗುತ್ತದೆ.

ಪುಸ್ತಕವನ್ನು ಓದುವಾಗ, ಒಬ್ಬ ವ್ಯಕ್ತಿಯು ಕಥೆಯಲ್ಲಿ ಅಥವಾ ಪುಸ್ತಕದಲ್ಲಿ ಬರೆದ ಘಟನೆಯಲ್ಲಿ ಕಳೆದುಹೋಗಿ ಫ್ಯಾಂಟಸಿಗೆ ಹೋಗುತ್ತಾನೆ.ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕವನ್ನು ಓದುವ ಮೂಲಕ, ಒಬ್ಬ ವ್ಯಕ್ತಿಯು ಶಿಕ್ಷಣ ಪಡೆಯುತ್ತಾನೆ ಮತ್ತು ಅವನ ಜೀವನದಲ್ಲಿ ಮುಂದೆ ಸಾಗುತ್ತಾನೆ.ಜಾಗೃತಿ ಪುಸ್ತಕಗಳನ್ನು ಓದುವುದರಿಂದ ಧರ್ಯ್ ಬರುತ್ತದೆ ಸಾಹಿತ್ಯ ಪುಸ್ತಕವು ಸಾಮಾಜಿಕ ಮತ್ತು ಸಾಮಾಜಿಕ ಮಾಹಿತಿಯನ್ನು ನೀಡುತ್ತದೆ. ಅನೇಕ ಐತಿಹಾಸಿಕ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ,ಅದನ್ನು ಓದುವ ಮೂಲಕ ಒಬ್ಬ ವ್ಯಕ್ತಿಯು ದೇಶದ ಮತ್ತು ಪ್ರಪಂಚದ ಆಸಕ್ತಿದಾಯಕ ಇತಿಹಾಸವನ್ನು ತಿಳಿದುಕೊಳ್ಳಬಹುದು.

ಭಾರತದ ಕೆಲವು ಗ್ರಂಥಾಲಯಗಳು
ಭಾರತದ ಹಳ್ಳಿಯಲ್ಲಿ ಗ್ರಂಥಾಲಯದ ಅವಶ್ಯಕತೆಯಿದೆ, ಇದರಿಂದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಮತ್ತು ಅವರ ಜ್ಞಾನವನ್ನು ಹೆಚ್ಚಿಸಬಹುದು. ಗ್ರಾಮದ ಜನರಿಗೆ ಹೊಸ ಆಯಾಮಗಳನ್ನು ನೀಡುವ ಅವಶ್ಯಕತೆಯಿದೆ.

ಭಾರತದಲ್ಲಿ ಬಹಳ ಕಡಿಮೆ ಮತ್ತು ಕಡಿಮೆ ಗ್ರಂಥಾಲಯಗಳಿವೆ. ಕೆಲವು ಪ್ರಮುಖ ಗ್ರಂಥಾಲಯಗಳ ಹೆಸರುಗಳು ಮತ್ತು ಅವುಗಳ ಸ್ಥಳಗಳನ್ನು ಕೆಳಗೆ ನೀಡಲಾಗಿದೆ:

  • ಗೌತಮಿ ಗ್ರುಂಧಾಲಯಂ: ರಾಜಮಂಡ್ರಿ, ಆಂಧ್ರಪ್ರದೇಶ.
  • ಖುದಾ ಬಕ್ಷ್ ಓರಿಯಂಟಲ್ ಲೈಬ್ರರಿ: ಪಾಟ್ನಾ
  • ಸಿನ್ಹಾ ಗ್ರಂಥಾಲಯ: ಪಾಟ್ನಾ
  • ಮಾ ಚಂದ್ರಕಾಂತ ಜಿ ಸಾರ್ವಜನಿಕ ಗ್ರಂಥಾಲಯ: ಪಾಟ್ನಾ
  • ಬುಕ್ ವರ್ಮ್ ಮಕ್ಕಳು: ಪನಾಜಿ (ಗೋವಾ)

ಉಪಸಂಹಾರ

ಗ್ರಂಥಾಲಯವು ಆದಾಯದ ಮೂಲವಾಗಿದೆ.
ಇಂದು ವಿದ್ಯಾವಂತರಿಗೆ ಉದ್ಯೋಗ ಸಿಗುತ್ತಿಲ್ಲ, ಅಂತಹ ಜನರು ತಮ್ಮ ಶಿಕ್ಷಣವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ತಮ್ಮ ನಗರ ಮತ್ತು ಪ್ರದೇಶದಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಿದ ಅನೇಕ ಜನರನ್ನು ನಾವು ನೋಡಿದ್ದೇವೆ. ಇದರ ಸಹಾಯದಿಂದ ಅವರು ತಮ್ಮ ಆದಾಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಗ್ರಂಥಾಲಯವು ಅಧ್ಯಯನ ಮಾಡಲು ಉತ್ತಮ ಸ್ಥಳವಾಗಿದೆ. ಇಂದು, ಅನೇಕ ನಗರಗಳಲ್ಲಿ, ನೀವು ಅನೇಕ ಗ್ರಂಥಾಲಯಗಳನ್ನು ನೋಡುತ್ತೀರಿ. ನೀವು ಸಹ ನಿರುದ್ಯೋಗಿಗಳಾಗಿದ್ದರೆ, ನೀವು ಗ್ರಂಥಾಲಯವನ್ನು ನಿಮ್ಮ ಉದ್ಯೋಗವನ್ನಾಗಿ ಮಾಡಬಹುದು. ಈ ಗ್ರಂಥಾಲಯಗಳ ಹೊರತಾಗಿ, ದೊಡ್ಡ ಮತ್ತು ಸಣ್ಣ ಗ್ರಂಥಾಲಯಗಳಿವೆ, ಅಲ್ಲಿ ಜನರು ಹೋಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪೂರೈಸಬಹುದು.

ಇವುಗಳಲ್ಲದೆ, ಕೆಲವು ಪುಸ್ತಕ ಪ್ರಿಯರು ಮತ್ತು ಸಾಮಾಜಿಕ ಕಾರ್ಯಕರ್ತರು ಸಹ ಚಲಿಸುವ ಗ್ರಂಥಾಲಯವನ್ನು ಪ್ರಾರಂಭಿಸಿದರು. ಇದು ತುಂಬಾ ಆಸಕ್ತಿದಾಯಕ ಮತ್ತು ಉಪಯುಕ್ತ ವಿಧಾನವಾಗಿದೆ . ಅನೇಕ ಪುಸ್ತಕಗಳನ್ನು ಚಲಿಸುವ ವ್ಯಾನ್ ಅಥವಾ ಟ್ರಾಲಿ ಟ್ರಕ್‌ನಲ್ಲಿ ಸಂಗ್ರಹಿಸಲಾಗುತ್ತದೆ, ಇದನ್ನು ಬೀದಿಗಳಲ್ಲಿ ತಿರುಗಿಸಲಾಗುತ್ತದೆ, ಗ್ರಾಮಗಳು, ಪಟ್ಟಣಗಳು, ನಗರಗಳು ಮತ್ತು ಪುಸ್ತಕಗಳನ್ನು ಅಲ್ಲಿನ ಜನರಿಗೆ ನೀಡಲಾಗುತ್ತದೆ.